ದೇಶಕ್ಕಾಗಿ ಬಲಿದಾನ ಮಾಡಿದ ಮಹನೀಯರ ಸ್ಮರಣೆ ಅಗತ್ಯ - ಜಿ. ಹೆಚ್.ನಾಯ್ಕ.
- news e - yellapur
- Jun 18, 2021
- 1 min read

ಯಲ್ಲಾಪುರ
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆ(ರಿ) ಆಯೋಜನೆಯಲ್ಲಿ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಝಾನ್ಸಿ ರಾಣಿ ಲಕ್ಷ್ಮಿಭಾಯಿ ಬಲಿದಾನ ದಿನದ ಆಚರಣೆ ನಡೆಯಿತು.

ಗೂಗಲ್ ಮೀಟ್ ಮೂಲಕ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ. ಹೆಚ್. ನಾಯ್ಕ ಉಪನ್ಯಾಸ ನೀಡಿ ನಾವು ಸ್ವಾತಂತ್ರ್ಯ ಅನುಭವಿಸುವುದಕ್ಕೆ ಕಾರಣ ದೇಶಕ್ಕಾಗಿ ಬಲಿದಾನ ಮಾಡಿದ ಮಹನೀಯರು. ಅಂತಹ ಮಹನೀಯರನ್ನು ಇಂದಿನ ಪೀಳಿಗೆಯ ವಿಧ್ಯಾರ್ಥಿಗಳಿಗೆ ಪರಿಚಯಿಸಿ ಅವರ ಶೌರ್ಯ, ಸಾಹಸ,ದೇಶಾಭಿಮಾನದ ಕುರಿತು ಅರಿವು ಮೂಡಿಸಬೇಕು.ಶಕ್ತಿ ಹಾಗೂ ಶೌರ್ಯದ ಸಂಕೇತವೇ ಝಾನ್ಸಿ ರಾಣಿ. ಇಂತಹ ಶ್ರೇಷ್ಠ ಮಹನೀಯರ ಕೊಡುಗೆ ದೇಶಕ್ಕೆ ಮಾದರಿಯಾಗಿದೆ. ಇಂತಹ ಮಹನೀಯರ ಸ್ಮರಣೆ ಅಗತ್ಯ ಎಂದರು.
ಕನ್ನಡ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಿಕೆ ಮುಕ್ತಾಶಂಕರ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧ್ಯಾರ್ಥಿನಿ ಕುಮಾರಿ ನಿಖಿತಾ ನಾಯ್ಕ ಪ್ರಾರ್ಥಿಸಿದರು.
ಸಹ ಶಿಕ್ಷಕಿ ಶ್ಯಾಮಲ ಕೆರೆಗದ್ದೆ ಪ್ರಸ್ತಾವಿಕ ನುಡಿಯೊಂದಿಗೆ ಸರ್ವರನ್ನು ಸ್ವಾಗತಿಸಿದರು.
ವಿದ್ಯಾರ್ಥಿನಿ ವೇದ ಪಟಗಾರ ಝಾನ್ಸಿ ಲಕ್ಷ್ಮೀ ಭಾಯಿಯವರ ಬಾಲ್ಯ ಹಾಗೂ ಹೋರಾಟದ ಕುರಿತು ಭಾಷಣ ಮಾಡಿದರು.
ಶಿಕ್ಷಕರಾದ ಗೀತಾ ಎಚ್.ವಿ ನಿರೂಪಿಸಿ, ಖೈರುನ್ ಶೇಖ ವಂದಿಸಿದರು.ಪ್ರೇಮ ಗಾಂವ್ಕಾರ್ ರವರು ತಾಂತ್ರಿಕ ನಿರ್ವಹಣೆ ಮಾಡಿದರು
ಎಲ್ಲಾ ಪದಾಧಿಕಾರಿಗಳು , ಮಕ್ಕಳು ಹಾಗೂ ಪಾಲಕರು,ಶಿಕ್ಷಕರು ಗೂಗಲ್ ಮೀಟ್ ಮೂಲಕ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.
------------------------------------------------------------------------------------------------
-------------------------------------------------------------------------------------------------
Comments