ಉಮ್ಮಚ್ಗಿಯಲ್ಲಿ ಕೋವಿಡ್19 ವ್ಯಾಕ್ಸೀನ್ ಮಹಾಮೇಳ
- news e - yellapur
- Jun 21, 2021
- 1 min read

ಯಲ್ಲಾಪುರ.
ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಮಗಾಗಿ ಹಗಲಿರುಳೂ ದುಡಿಯುತ್ತಿದ್ದಾರೆ. ಅವರನ್ನು ನಾವು ಗೌರವಿಸಬೇಕು. ಪ್ರತಿಯೊಬ್ಬರೂ ವ್ಯಾಕ್ಸೀನ್ ಪಡೆದು ಕೊರೋನಾವನ್ನು ದೂರವಿರಿಸೋಣ ಎಂದು ಉಮ್ಮಚ್ಗಿ ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ ಹೇಳಿದರು.

ಅವರು ಸೋಮವಾರ ಉಮ್ಮಚ್ಗಿಯ ವಿದ್ಯಾಗಣಪತಿ ಸಭಾಭವನದಲ್ಲಿ ನಡೆದ ಕೋವಿಡ್19 ವ್ಯಾಕ್ಸೀನ್ ಮಹಾಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಚವತ್ತಿ ಆರೋಗ್ಯ ಉಪಕೇಂದ್ರದ ವೈದ್ಯೆ ಡಾ. ಸುಶ್ಮಾ ಮಾತನಾಡಿ, ಕೋವಿಡ್ ನಿಯಮಾವಳಿಯನ್ನು ಪಾಲಿಸಿ, ಲಸಿಕೆ ಪಡೆಯಲು ವಿನಂತಿಸಿದರು.
ಉಮ್ಮಚ್ಗಿ ಗ್ರಾ.ಪಂ.ಅಧ್ಯಕ್ಷೆ ರೂಪಾ ಪೂಜಾರಿ, ಉಪಾಧ್ಯಕ್ಷ ಶಿವರಾಯ ಪೂಜಾರಿ, ಗ್ರಾ.ಪಂ. ಸದಸ್ಯರಾದ ಖೈತಾನ್ ಡಿಸೋಜ, ಗ.ರಾ.ಭಟ್ಟ, ಚವತ್ತಿ ಉಪ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಮೇಘನಾ, ಲ್ಯಾಬ್ ಟೆಕ್ನಿಶಿಯನ್ ವಿಜಯಾ, ಪ್ರಮುಖರಾದ ಮಂಜು ಮೊಗೇರ ಉಮ್ಮಚ್ಗಿ, ಶ್ರೀಪಾದ ಹೆಗಡೆ ಸಂಕದಗುಂಡಿ, ಮಣಿ ದೇವಾಡಿಗ ಉಮ್ಮಚ್ಗಿ ಮೊದಲದವರಿದ್ದರು.

ಆದ್ಯತಾ ವಲಯದ ಆರೋಗ್ಯ ಇಲಾಖೆಯ ಸಿಬ್ಬಂದಿ, ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯ ಕರ್ತೆಯರು, ಆರಕ್ಷಕರು ಮೊದಲಾದವರ ಕುಟುಂಬದ ಸದಸ್ಯರು ಮತ್ತು45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು.
------------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LDx7u0jeklJ4M91sLRx6cu
-------------------------------------------------------------------------------------------------
Comments