ಯಲ್ಲಾಪುರದಲ್ಲಿ ಯೋಗ ದಿನಾಚರಣೆ
- news e - yellapur
- Jun 21, 2021
- 1 min read

ಯಲ್ಲಾಪುರ.
ಪಟ್ಟಣ ಏಪಿಎಂಸಿ ಆವಾರದ ಅಡಿಕೆ ಭವನದಲ್ಲಿ ಸೋಮವಾರ ಬೆಳಿಗ್ಗೆ 7ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಪತಂಜಲಿ ಯೋಗ ಸಮಿತಿ ಯಲ್ಲಾಪುರ ಹಾಗೂ ಭಾರತೀಯ ಜನತಾ ಪಾರ್ಟಿ ಯಲ್ಲಾಪುರಮಂಡಲ ಇವರ ಆಶ್ರಯದಲ್ಲಿ ಸರಳವಾಗಿ ಆಚರಿಸಲಾಯಿತು. ಆನ್ಲೈನ್ ಮುಖಾಂತರ ಪ್ರಸ್ತುತಪಡಿಸಲಾಯಿತು. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ದೀಪ ಪ್ರಜ್ವಲನ ಮಾಡಿ ಮಾತನಾಡಿ, ಯೋಗದ ಮೂಲಕ ಆರೋಗ್ಯ ಹಾಗೂ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂದರು.
ನಂತರ ನಡೆದ ಯೋಗ ಪ್ರಾತ್ಯಕ್ಷಿಕೆಯನ್ನು ಯೋಗ ಶಿಕ್ಷಕರಾದ ಕನಕಪ್ಪ ಹಾಗೂ ನಾಗೇಶ್ ರಾಯ್ಕರ್ ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ಆಸನ ಪ್ರಾಣಾಯಾಮ ಧ್ಯಾನ ಇತ್ಯಾದಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ದಿವಾಕರ ಮರಾಠಿ ತಾಂತ್ರಿಕ ವ್ಯವಸ್ಥೆ ಹಾಗೂ ಸಭೆಯನ್ನು ನಿರ್ವಹಿಸಿದರು.

ಈ ಸಂದರ್ಭದಲ್ಲಿ ತಾಲೂಕ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿ.ಕೆ. ಭಟ್ಟ, ಶೀಗೆಪಾಲ್, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಮುಖರಾದ ಸೋಮೇಶ್ವರ ನಾಯಕ್ ಪ್ರದೀಪ್ ಯಲ್ಲಾಪುರಕರ್, ಬಾಬಾಸಾಬ್ ಅಲ್ಲನ ಆದಿತ್ಯ ಗುಡಿಗಾರ್, ಜಿ.ಎಸ್ ಭಟ್ಟ ಹಳವಳ್ಳಿ, ಶೈಲಶ್ರೀ ಭಟ್ಟ ಮುಂತಾದವರು ಇದ್ದರು.
------------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LDx7u0jeklJ4M91sLRx6cu
-------------------------------------------------------------------------------------------------
Comments