ಸುರಕ್ಷಿತವಾಗಿ ವಾಪಸ್ ಬಂದ ಶಿರ್ಲೆ ಪಾಲ್ಸ್ ಪ್ರವಾಸಿಗರ ಮೊಗದಲ್ಲಿ ಮಂದಹಾಸ.
- news e - yellapur
- Jul 23, 2021
- 1 min read


23-7-2021.
ಶುಕ್ರವಾರ.
ಗುರುವಾರ ತಾಲೂಕಿನ ಶೀರ್ಲೆ ಜಲಪಾತ ಪ್ರವಾಸಕ್ಕೆಂದು ಬಂದಿದ್ದ ಹುಬ್ಬಳ್ಳಿಯ ನವನಗರದ 6 ಜನ ಪ್ರವಾಸಿಗರು ಮಳೆಯ ರಭಸಕ್ಕೆ ಜಲಪಾತ ಪ್ರದೇಶದ ಕಾಡಿನಲ್ಲಿ ಉಳಿದು, ಶುಕ್ರವಾರ ಬೆಳಿಗ್ಗೆ ಸುರಕ್ಷಿತವಾಗಿ ವಾಪಸ್ ಬಂದಿದ್ದು, ಈ ಪ್ರವಾಸಿಗರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ. ಅಫ್ತಾಬ್,ಇಮ್ತಯಾಜ್,ಮೆಹಬೂಬ್,ಅಹ್ಮದ್,ಶಾನವಾಜ್,ಆಸಿಫ್ ಎನ್ನುವ ಈ ಯುವಕರು ಈಗ ಊರಿಗೆ ತೆರಳಿದ್ದಾರೆ.
ಈ ಕುರಿತು ಇಂದು
ಯಲ್ಲಾಪುರದಲ್ಲಿ E- ಯಲ್ಲಾಪುರ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ತಮಗೆ ಎದುರಾಗಿದ್ದ ಆತಂಕವನ್ನು ಎಳೆಎಳೆಯಾಗಿ ತೆರೆದಿಟ್ಟರು. ಇವರ ಹುಡುಕಾಟಕ್ಕಾಗಿ ಹುಬ್ಬಳ್ಳಿಯಿಂದ 30 ಜನ ಸಂಬಂಧಿಕರು ಆಗಮಿಸಿದ್ದರು.
---ADVT---


---------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt *****************************************************
ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------
コメント