top of page

ಸುರಕ್ಷಿತವಾಗಿ ವಾಪಸ್ ಬಂದ ಶಿರ್ಲೆ ಪಾಲ್ಸ್ ಪ್ರವಾಸಿಗರ ಮೊಗದಲ್ಲಿ ಮಂದಹಾಸ.


23-7-2021.

ಶುಕ್ರವಾರ.

ಗುರುವಾರ ತಾಲೂಕಿನ ಶೀರ್ಲೆ ಜಲಪಾತ ಪ್ರವಾಸಕ್ಕೆಂದು ಬಂದಿದ್ದ ಹುಬ್ಬಳ್ಳಿಯ ನವನಗರದ 6 ಜನ ಪ್ರವಾಸಿಗರು ಮಳೆಯ ರಭಸಕ್ಕೆ ಜಲಪಾತ ಪ್ರದೇಶದ ಕಾಡಿನಲ್ಲಿ ಉಳಿದು, ಶುಕ್ರವಾರ ಬೆಳಿಗ್ಗೆ ಸುರಕ್ಷಿತವಾಗಿ ವಾಪಸ್ ಬಂದಿದ್ದು, ಈ ಪ್ರವಾಸಿಗರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ. ಅಫ್ತಾಬ್,ಇಮ್ತಯಾಜ್,ಮೆಹಬೂಬ್,ಅಹ್ಮದ್,ಶಾನವಾಜ್,ಆಸಿಫ್ ಎನ್ನುವ ಈ ಯುವಕರು ಈಗ ಊರಿಗೆ ತೆರಳಿದ್ದಾರೆ.

ಈ ಕುರಿತು ಇಂದು

ಯಲ್ಲಾಪುರದಲ್ಲಿ E- ಯಲ್ಲಾಪುರ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ತಮಗೆ ಎದುರಾಗಿದ್ದ ಆತಂಕವನ್ನು ಎಳೆಎಳೆಯಾಗಿ ತೆರೆದಿಟ್ಟರು. ಇವರ ಹುಡುಕಾಟಕ್ಕಾಗಿ ಹುಬ್ಬಳ್ಳಿಯಿಂದ 30 ಜನ ಸಂಬಂಧಿಕರು ಆಗಮಿಸಿದ್ದರು.

---ADVT---

---------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------



 
 
 

コメント


bottom of page