ಕುಂಭದ್ರೋಣ ಮಳೆಗೆ ಹಲವು ಅವಘಢ. ;
- news e - yellapur
- Jul 23, 2021
- 1 min read

23-7-2021. ಶುಕ್ರವಾರ.
ಯಲ್ಲಾಪುರ.
ಗುರುವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಲವೆಡೆ ಅವಘಡಗಳು ಸಂಭವಿಸಿವೆ. ತಾಲೂಕಿನ ಕಳಚೆ ವ್ಯಾಪ್ತಿಯ ಹೊಸಕುಂಬ್ರಿಯಲ್ಲಿ ಗುಡ್ಡ ಕುಸಿದಿದೆ ಎನ್ನಲಾಗಿದೆ.

ತೆಲಂಗಾರ ಬಳಿ ರಸ್ತೆಯ ಪಕ್ಕದ ಧರೆ ಕುಸಿದಿದೆ. ಕಳಚೆ ಭಾಗದಲ್ಲಿ ಅಡಕೆ ತೋಟ, ಗೇರು ಪ್ಲಾಟ್ಗೆ ನೀರು ನುಗ್ಗಿ ಹಾನಿಯಾದ ವರದಿಯಾಗಿದೆ.
ಆರೋಗ್ಯಕೇಂದ್ರಕ್ಕೆ ನುಗ್ಗಿದ ನೀರು;
ತಾಲೂಕಿನ ವಜೃಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಮಳೆ ನೀರು ನುಗ್ಗಿದೆ.

ಹಳವಳ್ಳಿ-ಕಲ್ಲೇಶ್ವರ ಭಾಗದಲ್ಲಿ ಪ್ರವಾಹದ ಆತಂಕ;
ತಾಲೂಕಿನ ಗಡಿಭಾಗವಾದ ಹಳವಳ್ಳಿ, ಕಲ್ಲೇಶ್ವರ ಭಾಗದಲ್ಲಿ ಗಂಗಾವಳಿ ನದಿಯು ತುಂಬಿ ಹರಿಯುತ್ತಿದೆ. ಕ್ಷಣಕ್ಷಣಕ್ಕೆ ನೀರಿನ ಮಟ್ಟ ಏರುತ್ತಿದೆ. ಈಗಾಗಲೇ ನದಿ ತೀರದ ಹಲವು ಭಾಗಗಳಲ್ಲಿ ತೋಟ, ವಸತಿ ಪ್ರದೇಶಕ್ಕೆ ನೀರು ನುಗ್ಗಿದೆ ಎಂದು ಈ ಭಾಗದ ಜನರು ತಿಳಿಸಿದ್ದಾರೆ.

---ADVT----


---------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt *****************************************************
ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------
Comments