top of page

ದೇಶಪಾಂಡೆ ಕುಟುಂಬದವರು ನೀಡಿದ ಟ್ಯಾಬ್ಲೆಟ್ ಕಿಟ್ ಹಸ್ತಾಂತರ.


ಯಲ್ಲಾಪುರ.

ಮಾಜಿ ಸಚಿವ,ಶಾಸಕ ಆರ್.ವಿ.ದೇಶಪಾಂಡೆ ಹಾಗೂ ಅವರ ಪುತ್ರ, ಪ್ರಶಾಂತ ದೇಶಪಾಂಡೆಯವರು ಯಲ್ಲಾಪುರ ತಾಲೂಕಾ ಆಸ್ಪತ್ರೆಗೆ ನೀಡಿದ 6ಸಾವಿರ ಗುಳಿಗೆಗಳನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.


ಗುಳಿಗೆಗಳನ್ನು ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯರಿಗೆ ಹಸ್ತಾಂತರಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕಾರ್ ಮಾತನಾಡಿ, ದೇಶಪಾಂಡೆಯವರ ಕುಟುಂಬದವರು ಈಗಾಗಲೇ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಪಿ.ಪಿ.ಇ.ಕಿಟ್‍ಗಳನ್ನು ಹಾಗೂ ಔಷಧಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಕಾಂಗ್ರೆಸ್ ಕೋವಿಡ್ ಕೇರ್ ಸಮೀತಿಯಿಂದ ಅಗತ್ಯ ಉಳ್ಳವರಿಗೆ ನೂರಾರು ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಸಲಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸೋಂಕಿತರಿಗೆ, ಬಡವರಿಗೆ ಹಾಗೂ ನೂರಾರು ಕುಟುಂಬಗಳಿಗೆ ವಿವಿಧ ರೀತಿಯ ಸಹಾಯಹಸ್ತ ನೀಡಲಾಗಿದೆ. ಉಚಿತ ಅಂಬ್ಯುಲೆನ್ಸ್ ಸೇವೆ ನೀಡಲಾಗಿದೆ. ಸದ್ಯದಲ್ಲಿಯೇ ವಿವಿಧ ಆಸ್ಪತ್ರೆಗಳಿಗೆ ಆಕ್ಸಿಜನ್ ಸಾಂಧ್ರಕಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು.

ಗುಳಿಗೆಗಳನ್ನು ಸ್ವೀಕರಿಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಕೃತಜ್ಞತೆ ಅರ್ಪಿಸಿದರು.

ತಾಲೂಕಾ ಕಾಂಗ್ರೆಸ್ ವಕ್ತಾರ ರವಿ ನಾಯ್ಕ, ಕಿಸಾನ್ ಸೆಲ್‍ನ ಅಣ್ಣಪ್ಪ, ಪೂಜಾ ನೇತ್ರೇಕರ್, ಡಾ.ದೀಪಕ್ ಭಟ್,ಡಾ.ಸೌಮ್ಯಾ ಕೆ.ವಿ. ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.

------------------------------------------------------------------------------------------------

-------------------------------------------------------------------------------------------------




 
 
 

Comments


bottom of page