top of page

ಯೋಗದಿನಾಚರಣೆ ವಿಶ್ವವನ್ನು ಒಂದುಗೂಡಿಸುತ್ತಿದೆ. ಸ್ವರ್ಣವಲ್ಲೀ ಶ್ರೀಗಳು.


ಯಲ್ಲಾಪುರ

ವಿಶ್ವ ಯೋಗದಿನಾಚರಣೆಯ ಪ್ರಯುಕ್ತ ಸೋಮವಾರ ಬೆಳಿಗ್ಗೆ ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಸ್ವತಃ ಯೋಗಾಸನಗಳನ್ನು ಮಾಡಿದರು.


ನಂತರ ಭಕ್ತರಿಗೆ ಯೋಗದಿನದ ಮಹತ್ವದ ಕುರಿತು ಸಂದೇಶಗಳನ್ನು ನೀಡಿ, ನಮ್ಮ ಜೀವನದಲ್ಲಿ ಯೋಗ ಬಹಳ ಮುಖ್ಯವಾಗಿದೆ. ವಿಶ್ವಯೋಗದಿನಾಚರಣೆಯ ಮೂಲಕ ಯೋಗದ ಬಗ್ಗೆ ಜಾಗೃತಿ ಮೂಡುತ್ತಿರುವುದು ಶ್ಲಾಘನೀಯವಾಗಿದೆ. ಯೋಗ ದಿನಾಚರಣೆಯು ಇಡೀ ವಿಶ್ವವನ್ನು ಒಂದುಗೂಡಿಸುತ್ತಿದೆ ಇದು ಹೆಮ್ಮೆಯ ಸಂಗತಿಯಾಗಿದೆ. ಸಮತ್ವತೆಯೇ ಯೋಗ. ಶರೀರದ ಆರೋಗ್ಯ ಸಮತೋಲನೆ ಮಾಡಿಕೊಂಡು, ಉಸಿರಾಟದಲ್ಲಿ ಸಮತ್ವತೆ ಇರಬೇಕು. ಪ್ರಾಣಕ್ಕೆ ಅದರದ್ದೇ ಆದ ಸಮತ್ವ ಇದೆ. ಮನಸ್ಸಿನ ಏಕಾಗೃತೆ ಹಾಗೂ ಶಾರಿರಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸವನ್ನು ನಿರಂತರವಾಗಿ ಮಾಡಬೇಕು. ಆಸನ ಹಾಗೂ ಪ್ರಾಣಾಯಾಮಗಳನ್ನು ತಿಳಿದು ಮಾಡಬೇಕು. ಮನಸ್ಸಿಟ್ಟು ಕೃಮವಾಗಿ ಮಾಡಬೇಕು. ಯೋಗಸಾಧನೆಗೂ ಕೌಶಲ್ಯ ಬೇಕಾಗುತ್ತದೆ. ಕೌಶಲದಿಂದ ಯೋಗ ಮಾಡುವ ಮೂಲಕ ಸಿದ್ಧಿ,ಸಾಧನೆಗಳನ್ನು ಮಾಡಬಹುದು. ಇಂದು ಮಾತ್ರವಲ್ಲಿ ಜೀವನದಲ್ಲಿ ಪ್ರತಿ ನಿತ್ಯವೂ ಯೋಗವನ್ನು ಮಾಡುವ ಮೂಲಕ ಆರೋಗ್ಯವಂತರಾಗಿರಬೇಕು ಎಂದರು.


ಶ್ರೀಗಳ ಯೋಗಾಸನವನ್ನು ಹಾಗೂ ಸಂದೇಶಗಳನ್ನು ಸ್ವರ್ಣವಲ್ಲೀ ಭಕ್ತವೃಂದ ಫೇಸ್ ಬುಕ್‍ಪೇಜ್ ಮೂಲಕ ಲೈವ್ ಮಾಡಲಾಯಿತು.

------------------------------------------------------------------------------------------------

-------------------------------------------------------------------------------------------------


 
 
 

Comentarios


bottom of page