top of page

ಶುಕ್ರವಾರ ಮಳೆ ಅವಘಡಗಳು;


ಯಲ್ಲಾಪುರ.

ಶುಕ್ರವಾರ ಸುರಿದ ಜೋರಾದ ಮಳೆಗೆ ವಿವಿದೆಡೆ ಕೆಲವು ಅವಗಢಗಳು ಸಂಭವಿಸಿವೆ.

ಯಲ್ಲಾಪುರ ಪಟ್ಟಣದ ನೂತನಗರ ಜಡ್ಡಿಯ ಮಹಾಬಲೇಶ್ವರ ಗಾಗು ನಾಯ್ಕ ಇವರ ವಾಸ್ತವ್ಯದ ಮನೆಯ ಗೋಡೆ ಕುಸಿದು ಬಿದ್ದು ಮನೆಯ ಮೇಲ್ಛಾವಣಿ ಮುರಿದು ಬಿದ್ದ ಘಟನೆ ನಡೆದಿದೆ. ಈ ಘಟನೆಯಲ್ಲಿ ಮಹಾಬಲೇಶ್ವರ ಗಾಗು ನಾಯ್ಕ ಇವರ ತಲೆಗೆ ಹಾಗೂ ಕಾಲಿಗೆ ಪೆಟ್ಟು ಬಿದ್ದಿದ್ದು ಅವರು ಸರ್ಕಾರಿ ಆಸ್ಪತ್ರೆ ಯಲ್ಲಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೆಟ್ಟಿ ನೀಡಿ, ಪರಿಶೀಲನೆ ನಡೆಸಿದ್ದು, 60 ಸಾವಿರ ರೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಶ್ರೀಧರ ಯಲೀಗೌಡ, ಪಟ್ಟಣ ಪಂಚಾಯತಿ ಸದಸ್ಯ ಅಬ್ದುಲ್ ಅಲಿ ಹಮೀದ್ ಇದ್ದರು.


ಆಸ್ಪತ್ರೆಗೆ ತಹಸೀಲ್ದಾರ್ ಭೆಟ್ಟಿ.

ಮಳೆ-ಗಾಳಿಗೆ ವಾಸ್ತವ್ಯದ ಮನೆಯ ಗೋಡೆ ಕುಸಿದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಮಹಾಬಲೇಶ್ವರ ನಾಯ್ಕ್ ಇವರನ್ನು ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್ ಭೆಟ್ಟಿಯಾಗಿ ಆರೋಗ್ಯ ವಿಚಾರಿಸಿದರು.

==================

ಚವತ್ತಿಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ


ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಚವತ್ತಿಯ ಸರೋಜಾ ಗಣಪತಿ ಹೆಗಡೆಯವರಿಗೆ ಸೇರಿದ ಗೋಡೌನ್ ಮತ್ತು ಮನೆಯ ಮೇಲೆ ಮರ ಬಿದ್ದ ಪರಿಣಾ ಹಾನಿಯಾದ ಘಟನೆ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಗೋಡೌನ್‍ಗೆ ಹಾನಿಯಾಗಿದೆ. ಅವರದೇ ಕಿರಾಣಿ ಅಂಗಡಿಯಲ್ಲಿದ್ದ ಅಕ್ಕಿ, ಹಿಂಡಿ, ಭತ್ತ, ಬೆಲ್ಲ, ಬೇಳೆ, ಕಾಳುಗಳು ಹಾಳಾಗಿವೆ.

ಸ್ಥಳಕ್ಕೆ ಉಮ್ಮಚ್ಗಿ ಗ್ರಾ.ಪಂ.ಉಪಾಧ್ಯಕ್ಷ ಶಿವರಾಯ ಪೂಜಾರಿ,ಕಂದಾಯ ಇಲಾಖೆಯ ಉಪ ತಹಶಿಲ್ದಾರ ಫರ್ನಾಂಡೀಸ್, ವಿಲೇಜ್ ಅಕೌಂಟೆಂಟ್ ಸವಿತಾ ಭಜಂತ್ರಿ ಮೊದಲಾದªರು ಭೆಟ್ಟಿನೀಡಿ ಹಾನಿಯನ್ನು ಅಂದಾಜಿಸಿದ್ದಾರೆ.

==================

ತಾರೆಹಳ್ಳಿಯಲ್ಲಿ ಮನೆಗೋಡೆ ಕುಸಿತ;



ಮಳೆ-ಗಾಳಿಗೆ ಯಲ್ಲಾಪುರ ತಾಲೂಕಿನ ತಾರೇಹಳ್ಳಿಯ ಗೀತ ಪುಟ್ಟಾ ಸಿದ್ದಿ ಇವರ ಮನೆಯ ಗೋಡೆ ಕುಸುದು ಮನೆಗೆ ಭಾಗಷಃ ಹಾನಿಯಾಗಿದೆ.

==================

ಯಲ್ಲಾಪುರ ತಾಲೂಕಿನಲ್ಲಿ ಶುಕ್ರವಾರ 65 ಮಿ.ಮಿ. ಮಳೆಯಾಗಿದ್ದು, ಈವರೆಗೆ783.8 ಮಿ.ಮಿ.ಮಳೆಯಾದಂತಾಗಿದೆ.


------------------------------------------------------------------------------------------------


-------------------------------------------------------------------------------------------------




 
 
 

Kommentare


bottom of page