top of page

ರಾಜ್ಯ ಮಟ್ಟದ ಚರ್ಚಾ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಯಲ್ಲಾಪುರದ ಜ್ಯೋತಿರಾದಿತ್ಯ ಭಟ್.


ಯಲ್ಲಾಪುರ:

ಅಥಣಿಯ ರಾಣಿ ಚನ್ನಮ್ಮಾ ಫೌಂಡೇಶನ್‍ನವರು ಏರ್ಪಡಿಸಿದ್ದ ರಾಜ್ಯ ಮಟ್ಟದ ಆನ್ಲೈನ್ ಚರ್ಚಾ ಸ್ಫರ್ಧೆಯಲ್ಲಿ ಯಲ್ಲಾಪುರದ ಜ್ಯೋತಿರಾದಿತ್ಯ ಭಟ್ ಪ್ರಥಮ ಸ್ಥಾನ ಪಡೆದಿದ್ದಾರೆ. ಭಾನುವಾರ ಅಥಣಿಯಲ್ಲಿ ನಡೆದ ಆನ್ಲೈನ್ ಕಾರ್ಯಕ್ರಮದಲ್ಲಿ ಸ್ಫರ್ಧಾ ವಿಜೇತರ ಹೆಸರನ್ನು ಸಂಘಟಕರು ಘೋಷಣೆ ಮಾಡಿದ್ದಾರೆ.

``ಭಾರತೀಯ ಸಂಪ್ರದಾಯ ವೈಜ್ಞಾನಿಕತೆಗೆ ಪೂರಕವೇ?'' ಎಂಬ ವಿಷಯದ ಪರವಾಗಿ, ಭಾರತೀಯ ಸಂಪ್ರದಾಯಗಳು ವೈಜ್ಞಾನಿಕತೆಗೆ ಯಾವ ರೀತಿ ಪೂರಕವಾಗಿವೆ ಎಂಬ ಕುರಿತು ತಮ್ಮ ಅಭಿಪ್ರಾಯವನ್ನು ಪ್ರಬುದ್ಧವಾಗಿ ಮಂಡಿಸಿದ್ದರು. ಇದೇ ವೇದಿಕೆಯ ವತಿಯಿಂದ ನಡೆದ ಚರ್ಚಾಸ್ಫರ್ಧೆ ಹಾಗೂ ವಿವಿಧ ಸ್ಫರ್ಧೆಗಳಲ್ಲಿ ರಾಜ್ಯದ ಹಾಗೂ ಅಂತರಾಜ್ಯಗಳ 200ಕ್ಕೂ ಹೆಚ್ಚು ಸ್ಫರ್ಧಿಗಳು ಭಾಗವಹಿಸಿದ್ದರು. ಭಾನುವಾರ ಈ ಸ್ಫರ್ಧೆಯ ವಿಜೇತರ ಹೆಸರನ್ನು ಘೊಷಣೆ ಮಾಡಲಾಗಿದ್ದು, ಪ್ರಥಮ ಸ್ಥಾನವನ್ನು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಜ್ಯೋತಿರಾದಿತ್ಯ ಭಟ್ ಹಾಗೂ ದ್ವಿತೀಯ ಸ್ಥಾನವನ್ನು ಮಹಾರಾಷ್ಟ್ರದ ಸಚಿನ್ ಚಿಂತಾಮಣಿ, ಮೂರನೇ ಸ್ಥಾನವನ್ನು ಶಿವಮೊಗ್ಗದ ಪೂಜಾ ತೀರ್ಥಹಳ್ಳಿ ಪಡೆದರು. ವಿಜೇತರಿಗೆ ನಗದು ಬಹುಮಾನಗಳನ್ನು ಘೋಷಿಸಲಾಯಿತು.

ಭಾನುವಾರ ಅಥಣಿಯಲ್ಲಿ ನಡೆದ ಬಹುಮಾನ ವಿಜೇತರ ಘೋಷಣೆಯ ಸಂದರ್ಭಲ್ಲಿ ಅಥಣಿಯ ಷಟ್ಟರ್ ಮಠದ ಪರಮ ಪೂಜ್ಯ ಮರುಳಸಿದ್ಧ ಸ್ವಾಮೀಜೀಯವರು, ರಾಣಿ ಚನ್ನಮ್ಮಾ ಫೌಂಡೇಶನ್ ಅಧ್ಯಕ್ಷ ಶಶಿಧರ ಬುರಲಿ, ಸಂಘಟನಾ ಪ್ರಮುಖರಾದ ನಾಗರಾಜ ಸನದಿ, ಅತಿಥಿಯಾಗಿ ಮಾನವ ಕಂಪ್ಯೂಟರ್ ಎಂದೆ ಪ್ರಸಿದ್ಧರಾದ ಬಸವರಾಜ ಉಮರಾಣಿ ಭಾಗವಹಿಸಿದ್ದರು.

ಜ್ಯೋತಿರಾದಿತ್ಯ ಭಟ್ ಅವರು ಯಲ್ಲಾಪುರದ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಹಾಗೂ ಲಲಿತಾ ಭಟ್ ಅವರ ಪುತ್ರ.



---------------------------------------ADVT---------


----------------------------------------------------

------------------------------------------------------

 
 
 

Comments


bottom of page